ವಿಭಾಗಗಳು

Sunday, March 1, 2015

ಶ್ರೀ ಪುರಂದರ ನಮನ ಮತ್ತು ಓಂಕಾರ ಸಮಿತಿ

"ಓಂಕಾರ ಸಮಿತಿ ವೃಂದಕ್ಕೆ ಕೋಟಿ ನಮನ"

ನಮಸ್ಕಾರ ನಮ್ಮ ಹೆಮ್ಮೆಯ ಓಂಕಾರ ಸಮಿತಿಯ ವೃಂದಕ್ಕೆ

|| ಶ್ರೀ ಪುರಂದರ ನಮನ|| ಎಂಬ ಈ ಹೊಸ ಸಂಗೀತ ಕಾರ್ಯಕ್ರಮವನ್ನು ಆಯೊಜಿಸಿ ನಮ್ಮ ಇಲ್ಲಿಯ ಅಂದರೆ ಸ್ಥಳೀಯ ಓಮಾನ್ ಕನ್ನಡಿಗರಲ್ಲಿ ಇರುವ ಸಂಗೀತ ಕಲಾ ಪ್ರತಿಭೆಗಳನ್ನು ಒಟ್ಟುಗೂಡಿಸಿ ಈ ಒಂದು ಸುಂದರ ವೇದಿಕೆಯನ್ನು ಒದಗಿಸಿ ಶ್ರೀ ಪುರಂದರದಾಸರು ರಚಿಸಿದ ಅದ್ಭುತ ದೇವರ ನಾಮವನ್ನು ಹಾಡಿಸಿ ನಮ್ಮೆಲ್ಲರನ್ನು ಹಾಗೂ ಕಾರ್ಯಕ್ರಮಕ್ಕೆ ಬಂದು ನಿಶ್ಯಬ್ದವಾಗಿ, ಭಕ್ತಿಯಿಂದ ಆಲಿಸಿದ ಎಲ್ಲ ಭಕ್ತರಾದಂತಹ ಪ್ರೇಕ್ಷಕರ ಜೀವನ ಪಾವನವಾಗುವಂತೆ ಮಾಡಿದ ನಮ್ಮ ಓಂಕಾರ ಸಮಿತಿ ವೃಂದಕ್ಕೆ ನನ್ನ ಕೋಟಿ ನಮನ. 

|| ಶ್ರೀ ಪುರಂದರ ನಮನ||, ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಿರಿಯ ಹಾಗೂ ಹಿರಿಯ ಕಲಾವಿದರು ಸಹ ತಮ್ಮ ಹಾಡಿನ ಮೂಲಕ ಶ್ರೀ ಪುರಂದರದಾಸರಿಗೆ ನಮನ ಸಲ್ಲಿಸಿದ್ದಾರೆ ಎಂದರೆ ತಪ್ಪಾಗಲಾರದು. ಗಾಯಕರು ಆಯಿದು ಎಲ್ಲ ದಾಸರ ಕೀರ್ತನೆಗಳು ಅತಿ ಅದ್ಭುತವಾಗಿದ್ದು ಮತ್ತು ಭಕ್ತಿ ಭಾವದಿಂದ ಹಾಡಿ ಆ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಹಾಗೆ ಅಷ್ಟೇ ಭಕ್ತಿ-ಭಾವದಿಂದ ಆಲಿಸಿದ ಎಲ್ಲ ಪ್ರೇಕ್ಶಕ ವೃಂದವು ಸಹ ಆ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದರೆ ತಪ್ಪಗಲಾರದು. 

ಸಂಗೀತ ಕಾರ್ಯಕ್ರಮಕ್ಕೆ ಇನ್ನು ಮೆರಗು ತಂದು ಕೊಟ್ಟಂತಹ ನಮ್ಮ ಪಕ್ಕವಾದ್ಯ ಸಹಾಯಕರಾದಂತಹ ಮೃದಂಗ ವಿದ್ವಾನ್ - ಶ್ರೀ ಸುಂದರೇಶನ್ ಮತ್ತು ಕು. ಸಂತೃಪ್ತ, ಹಾರ್ಮೊನಿಯಮ್ ಪ್ರವೀಣ - ಶ್ರೀ ಕರುಣಾಕರ್ ರಾವ್ ಮತ್ತು ಶ್ರೀ ಸುರೇಂದ್ರ ಆಚಾರ್ಯ, ತಬಲಾ ಪ್ರವೀಣ - ಶ್ರೀ ಗಿರೀಶ್ ನಾಯಕ್ ಮತ್ತು ಶ್ರೀ ನವೀನ್ ಆಚಾರ್ಯ, ವಯೊಲಿನ್ ನುಡಿಸಿದಂತಹ ಕಿರಿಯ ಕಲವಿದರಾದಂತಹ ಕು. ಪ್ರೀತಿ ಕೋಡಂಚ ಮತ್ತು ಕು. ಅರುಣ್ ಕುಮಾರ್ ಮತ್ತು ಸಂಗೀತ ಕಲಾವಿದರನ್ನು ಹುರಿದುಂಬಿಸಿ ಹಾಗೂ ಶ್ರೀ ಪುರಂದರದಾಸರ ಹಿರಿಮೆಯನ್ನ, ಅವರ ಚರಿತ್ರೆಯನ್ನ ಮತ್ತು ಅವರು ಸಂಗೀತ ಕ್ಷೇತ್ರಕ್ಕೆ ಕೊಟ್ಟಂತಹ ಕೊಡುಗೆಯನ್ನು ನಮಗೆಲ್ಲ ಅಚ್ಚುಕಟ್ಟಾಗಿ ಉಣಬಡಿಸಿದ ನಮ್ಮ ಶ್ರೀಮತಿ ಕವಿತಾ ರಾಮಕೃಷ್ಣರವರು - ಒಟ್ಟಿಗೆ ಎಲ್ಲರು ಸಹ || ಶ್ರೀ ಪುರಂದರ ನಮನ|| ಸಂಗೀತ ಕಾರ್ಯಕ್ರಮ ಸುಂದರ ಮತ್ತು ಭಕ್ಥಿ ಭಾವದಿಂದ ಮೂಡಿ ಬರಲು ಮನಃಪೂರಕವಾಗಿ ಸಹಕರಿಸಿದ್ದಾರೆ. ಅವರು ಸಹ ಆ ದೇವರ ಕೃಪೆಗೆ ಪಾತ್ರರಾಗಿದ್ದರೆ ಮತ್ತು ಅವರಿಗೂ ನಮ್ಮೆಲ್ಲರ ಹೃತ್ಪೂರ್ವಕ ವಂದನೆಗಳು.

ಈ ಒಂದು ಕಾರ್ಯಕ್ರಮ ಹೀಗೆ ಪ್ರತಿವರ್ಷ ಇನ್ನೂ ವಿಜೃಂಭಣೆಯಿಂದ ನಡೆದುಕೊಂಡು ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ. ಈ ಒಂದು ಹೊಸ ಪ್ರಯತ್ನ ನಿಜವಾಗಲೂ ಒಂದು ಅದ್ಬುತವಾದಂತಹ ಮತ್ತು ಧಾರ್ಮಿಕವಾದಂತಹ ಒಂದು ಪವಿತ್ರವಾದ ಪ್ರಯತ್ನ. ಆ ದೇವರು ಓಂಕಾರ ಸಮಿತಿಯ ವೃಂದಕ್ಕೆ ಇನ್ನೂ ಹೆಚ್ಚು ಶೃದ್ಧೆ, ಭಕ್ತಿ, ಶಕ್ತಿ ಕೊಡಲಿ ಎಂದು ಅಶಿಸುತ್ತೇನೆ.

ನಾನು ಒಬ್ಬ ಕಲಾವಿದನಾಗಿ ಹೇಳಲು ಇಚ್ಚಿಸುವದೇನೆಂದರೆ, ಓಂಕಾರ ಸಮಿತಿ ವೃಂದವು ಪ್ರತಿವರ್ಷ ವಿಧ-ವಿಧವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನ ಭಕ್ತಿ-ಭಾವ ಮತ್ತು ಮನಃಪೂರ್ವಕವಾಗಿ ನಡೆಸಿಕೊಂಡು ಬರುತ್ತ ಇರುವದು ನಮ್ಮೆಲ್ಲರಿಗೆ ಗೊತ್ತಿರುವ ವಿಷಯ. ಈ ಒಂದು ಪವಿತ್ರವಾದ || ಶ್ರೀ ಪುರಂದರ ನಮನ|| ಭಕ್ತಿಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡು ನಮ್ಮಂತಹ ಸ್ಥಳೀಯ ಸಂಗೀತ ಕಲಾವಿದರನ್ನು ಗುರುತಿಸಿ ಈ ಒಂದು ಭವ್ಯವಾದ ವೇದಿಕೆಯ ಮೂಲಕ ಶ್ರೀ ಪುರಂದರದಾಸರ ಹರಿಕೀರ್ತನೆಯನ್ನು ಭಕ್ತಿಯಿಂದ ಹಾಡಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ನಮ್ಮ ಸ್ಥಳೀಯ ಎಲ್ಲ ಸಂಗೀತ ಕಲಾವಿದರ ಪರವಾಗಿ ನಾನು ಧನ್ಯವಾದಗಳನ್ನ ಅರ್ಪಿಸಲು ಇಚ್ಚಿಸುತ್ತೇನೆ.

ಹೃತ್ಪೂರ್ವಕ ಧನ್ಯವಾದಗಳು ನಿಮಗೆ

"ಜೈ ಓಂಕಾರ ಸಮಿತಿ"

ವಂದನೆಗಳೊಂದಿಗೆ,

ಇಂತಿ ನಿಮ್ಮ ಚಿಕ್ಕ ಕಲಾವಿದ

ರವಿಪ್ರಕಾಶ ಏ ಎಸ್