ವಿಭಾಗಗಳು

Thursday, February 27, 2014

ದಯಾಮಯೀ ಈ ಶಿವಾ!!


ಲೇಖಕರು: ರವಿಪ್ರಕಾಶ ಎ. ಎಸ್. 


ಎಲ್ಲರಿಗೂ ನಮಸ್ಕಾರ,

ಧನ್ಯವಾದಗಳು ಓಂಕಾರ ಸಮಿತಿಗೆ. ನಿಮಗೂ ಸಹ ಈ ಮಹಾಶಿವರಾತ್ರಿಯ ಸಮಯದಲ್ಲಿ ಶುಭವನ್ನು ಕೊರುತ್ತೇನೆ. 

ಈ ಶುಭದಿನದಂದು ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ - ಬೂದಿಬಡಕ ಶಿವನು ಸಹ ಕಷ್ಟದಲ್ಲಿ ಇರುವವನೇ, ಅಂದರೆ ಅವನ ವಾಸ ರುದ್ರಭೂಮಿ - ಬೆಟ್ಟಗುಡ್ಡಗಳ ನಡುವೆ, ಅವನ ಅಭರಣ ನಾಗ (ಹಾವು), ಅವನ ಮೈಯೆಲ್ಲ ಬೂದಿ (ಭಸ್ಮ) ಲೇಪಿತ, ಜಟಾದಾರಿ (ಕಿರೀಟವೇ ಇಲ್ಲದವನು), ಚರ್ಮವನ್ನೇ ಬಟ್ಟೆಯಾಗಿ ಸುತ್ತಿಕೊಂಡವ, ಅವನ ಪೂಜೆ ಲಿಂಗರೂಪಿತ ವಿಗ್ರಹಕ್ಕೆ - ಹೀಗಿರುವಾಗ ಅವನಿಗೆಲ್ಲಿದೆ ಸುಖದ ಮತ್ತು ವೈಭವದ ಪೀಠ? ಹಾಗಾಗಿ ಮಾನವನ ಸಂಕಷ್ಟಗಳು ಭಸ್ಮಲೇಪಿತ ಶಿವನಿಗೆ ಗೊತ್ತಿರುವಂತ ವಿಷಯವೇ. ಆವನು ಇರುಹುದೆ ತನ್ನಲ್ಲಿ ಭಕ್ತಿಯಿಂದ ನೊಂದು ಬರುವ ಭಕ್ತಾದಿಗಳನ್ನು ಕಾಪಾಡಲು. 

ಅದಕ್ಕೆ ಅವನನ್ನು ಮನಸ್ಸು ಎಂಬ ದೇಗುಲದಲ್ಲಿ, ಭಕ್ತಿ ಎಂಬ ಪೀಠದಲ್ಲಿ ಕುಳ್ಳಿರಿಸಿ, ಏಕಾಗ್ರತೆಯೆಂಬ ದೀಪದಿಂದ, ಮೂರು ಎಲೆಯನ್ನು ಹೊಂದಿರುವ ಬಿಲ್ವಪತ್ರೆಯಿಂದ ಪೂಜಿಸಿದರೆ ಒಲಿಯುವನು ಆ ನಮ್ಮ ಶಿವಪ್ಪ. ಆದ್ದರಿಂದ ಈಶ್ವರನು ಭಕ್ತರ ದಯಾಸಿಂಧು. ಅವನಲ್ಲಿ ಭಕ್ತಿಯಿಂದ ಬೇಡಿದರೆ ಶೀಘ್ರವಾಗಿ ವರವನ್ನ ದಯಪಾಲಿಸುವಂತಹ ಪರಮ ಈಶ್ವರ ಪರಮೇಶ್ವರನು. 

ಈ ಒಂದು ಶುಭದಿನದಲ್ಲಿ ಆ ಶಿವನಲ್ಲಿ ಬೇಡುಹುದೇನೆಂದರೆ, ಇಲ್ಲಿರುವ ಎಲ್ಲ ಭಕ್ತಾದಿಗಳನ್ನು ರಕ್ಷಣೆ ಮಾಡಿ ಅನುಗ್ರಹಿಸು ತಂದೆ ಎಂದು. ಎಲ್ಲ ಅವರವರ ಊರು, ಮನೆ, ನೆಂಟರು, ಇಷ್ಟರು, ಮಠಾದಿಗಳನ್ನ ಬಿಟ್ಟು ಗೊತ್ತು ಗುರಿಯಿಲ್ಲದ ಈ ಹೊರದೇಶದಲ್ಲಿ ಬಂದು ನಿಷ್ಠೆಯಿಂದ ಕಾರ್ಯ ಮಾಡಿ ಅವರವರ ಸಂಸಾರ ಸಾಗಿಸುತ್ತಿರುವಂತ ಎಲ್ಲರಿಗೂ ಆ ಈಶ್ವರನು ಈ ಒಂದು ಶುಭದಿನದಂದು ಸಂತೋಷವನ್ನು, ನೆಮ್ಮದಿಯನ್ನು, ಅರೋಗ್ಯವನ್ನು, ಆಯುಷ್ಯವನ್ನು, ಐಶ್ವರ್ಯಾದಿಗಳನ್ನು ದಯಪಾಲಿಸಲಿ ಅದರೊಂದಿಗೆ ಈ ಹೊರದೇಶದಲ್ಲಿ ನಮ್ಮನ್ನೆಲ್ಲಾ ರಕ್ಷಣೆ ಮಾಡೆಂದು ಮನಃಪೂರ್ವಕವಾಗಿ ಆ ಪರಮೇಶ್ವರನಲ್ಲಿ ಕೈಮುಗಿದು ಬೇಡೋಣ.

ಎಲ್ಲರಿಗೂ ಶುಭವಾಗಲಿ. 

ಓಂ ನಮಃ ಶಿವಾಯ ಓಂ.....  
ಓಂ ನಮಃ ಶಿವಾಯ ಓಂ.....  
ಓಂ ನಮಃ ಶಿವಾಯ ಓಂ.....  
ಓಂ ನಮಃ ಶಿವಾಯ ಓಂ.....  
ಓಂ ನಮಃ ಶಿವಾಯ ಓಂ.....  

ಎಂಬ ಈ ಪಂಚಾಕ್ಷರೀ ಮಹಾಮಂತ್ರವನ್ನು ಪ್ರತಿದಿನ *೧೦೮* ಸಲ ಯಾರು ಜಪಿಸುತ್ತಾರೋ ಅವರಿಗೆ ಆ ಶಿವನ ಅನುಗ್ರಹ ಸದಾಕಾಲ ಇರುತ್ತದೆ ಇದರಲ್ಲಿ ಸಂಶಯ ಬೇಡ.

ಶುಭಂ. ಎಲ್ಲರಿಗೂ ಒಳ್ಳೆಯದಾಗಲಿ.

ನಮಸ್ಕಾರ

ಇಂತಿ ನಿಮ್ಮವ,
ರವಿಪ್ರಕಾಶ. ಏ. ಎಸ್.

Wednesday, February 5, 2014

|| ಬ್ರಹ್ಮಾನಂದ ಓಂಕಾರ, ಆತ್ಮಾನಂದ ಝೇಂಕಾರ ||

 ಲೇಖಕರು: ರವಿಪ್ರಕಾಶ  ಎ. ಎಸ್.   

ಎಲ್ಲ ಭಕ್ತಾದಿಗಳಿಗೂ ಈ ಕಿರಿಯನ ನಮಸ್ಕಾರ,

"ಬ್ರಹ್ಮಾನಂದ ಓಂಕಾರ, ಆತ್ಮಾನಂದ ಝೇಂಕಾರ" 
ಅನ್ನುವ ಹಾಗೆ
"ಓಂಕಾರ ಸಮಿತಿ - ಓಂಕಾರ ಝೇಂಕಾರ"


"ಓಂಕಾರ ಸಮಿತಿ" ಎಂದ ಕ್ಷಣವೇ ಒಂದು "ಓಂಕಾರದ ಝೇಂಕಾರ", ಮೊಳಗಿಸಿದಂತಾಗುಹುದು, ಎಂದು ಹೇಳೋದಕ್ಕೆ ಇಷ್ಟಪಡುತ್ತೇನೆ. ಅದೇಕೆ ಹಾಗಾಗುತ್ತೆ ಅಂತ ನೀವು ಕೇಳಬಹುದು, ಅದೇ ಅದರ ಗುಟ್ಟು. 

"ಓಂಕಾರ ಸಮಿತಿ" ಈ ವರೆಗೆ ನಡೆಸಿಕೊಂಡು ಬಂದಂತ ಎಲ್ಲ ಕಾರ್ಯಕ್ರಮಗಳನ್ನು ಮೆಲುಕು ಹಾಕುತ್ತ ಬರುವ ಎಲ್ಲ ಭಕ್ತಾದಿಗಳಿಗೂ ಅನ್ನಿಸುಹುದು ಏನೆಂದರೆ, ಈ ಸಮಿತಿ ಎಂತೆಂತಹ ಉಪಯುಕ್ತ, ಸಂಯುಕ್ತ, ಧಾರ್ಮಿಕ ಕಾರ್ಯಕ್ರಮಗಳನ್ನು ನಿಸ್ವಾರ್ಥದಿಂದ ಈ ಹೊರ ದೇಶದಲ್ಲಿ ಇರುವ ನಮ್ಮೆಲ್ಲರಿಗೂ ನೀಡುತ್ತ ಬಂದಿದೆ ಅಲ್ಲವಾ - ಅನ್ನೋ ಮಾತೆ "ಓಂಕಾರದ ಝೇಂಕಾರ".

ನಾನೇನು ಹೇಳಲು ಬಂದೆ ಅಂದ್ರೆ, ಈಗ ಇನ್ನೊಂದು ಸುದಿನವನ್ನು ಉಣಬಡಿಸಲು ಮುಂದಾಗಿದ್ದಾರೆ ನಮ್ಮ "ಓಂಕಾರ ಸಮಿತಿ". ಅದೇ "ಶ್ರೀ ಸತ್ಯನಾರಾಯಣ ಪೂಜೆ ೨೦೧೪". ಇದೇ ಸಂವತ್ಸರದ ಮುಂದಿನ ಮಾರ್ಚ್ ಮಾಸದ ೧೪ ನೇ ದಿನದಂದು ಹಮ್ಮಿಕೊಂಡಿದ್ದಾರೆ. ಈ ಒಂದು ಧಾರ್ಮಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನಿಮಗೆಲ್ಲರಿಗೂ ತಲುಪಿಸುವ ಕಾರ್ಯ ಓಂಕಾರ ಸಮಿತಿ ಮಾಡಿರುತ್ತದೆ, ಅದರಲ್ಲಿ ಸಂಶಯವಿಲ್ಲ. 

ಭಕ್ತಾದಿಗಳಲ್ಲಿ ಒಂದು ನಮ್ರ ವಿನಂತಿ ಅದೇನೆಂದರೇ "ಓಂಕಾರ ಸಮಿತಿ" ನಡೆಸುವ ಈ ನಿಸ್ವಾರ್ಥ ಧಾರ್ಮಿಕ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸ್ವಯಂ ಇಚ್ಚೆಯಿಂದ ಮುಂದಾಗಿ ಬಂದು ಅವರೊಂದಿಗೆ ಆದಷ್ಟು ನಮ್ಮ ಕೈ ಜೋಡಿಸಿ,  ನಮ್ಮ ಒಂದು ಚಿಕ್ಕ ’ಅಳಿಲು ಸೇವೆ’ ಎಂದು ಮನಃಪೂರ್ವಕವಾಗಿ ಆ ದೇವರಲ್ಲಿ ಪ್ರಾರ್ಥಿಸಿ ಈ ಸುಂದರ ದೇವರ ಕಾರ್ಯಕ್ರಮ ಅತಿ ಭಕ್ತಿಭಾವದಿಂದ ನೆರವೇರಿಸಲು ನೀವೆಲ್ಲರೂ ಸಹಕರಿಸಿ ಆ ಭಗವಂತನ ಕೃಪೆಗೆ ಪಾತ್ರರಾಗುವಿರಾಗಿ ನಂಬಿದ್ದೇನೆ. 

ಈ ಸಂದರ್ಭದಲ್ಲಿ ಇನ್ನೊಂದು ವಿಷಯ ಹೇಳಲು ಇಷ್ಟಪಡುತ್ತೇನೆ, ಅದೇನೆಂದರೆ, ಮುಂಬರುವ ದಿನಗಳಲ್ಲಿ ಅನೇಕಾನೇಕ ಸುಂದರ ಕಾರ್ಯಕ್ರಮಗಳನ್ನು ಉಣಬಡಿಸಲು ಹೊಸ ಹೊಸ ಯೋಜನೆಗಳನ್ನು ನಮ್ಮ "ಓಂಕಾರ ಸಮಿತಿ" ಹಮ್ಮಿಕೊಂಡಿದೆ ಎಂಬ ವಿಷಯ ಕೇಳಿ ತುಂಬ ಹೆಮ್ಮೆ ಆಗುತ್ತದೆ. ಆದಕ್ಕಾಗಿ ನಾವೆಲ್ಲರೂ ಕೈಜೋಡಿಸುವ ಪ್ರಯತ್ನ ಮಾಡೋಣ ಅಲ್ವಾ? ಆದಕ್ಕಾಗಿ ಆ ಭಗವಂತನು "ಓಂಕಾರ ಸಮಿತಿ" ಯ ಎಲ್ಲ ಸದಸ್ಯರಿಗೂ ನಿಸ್ವಾರ್ಥ, ತುಂಬು ಮನಸ್ಸು, ಶಕ್ತಿಯನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವ. ಎಲ್ಲ ಭಕ್ತಾದಿಗಳ ಪರವಾಗಿ ’ಓಂಕಾರ ಸಮಿತಿ" ಗೆ ನನ್ನ ಧನ್ಯವಾದಗಳನ್ನು ಹೇಳುತ್ತೇನೆ.

ಹಾಗೇ ಆ ಭಗವಂತ ಸರ್ವರಿಗೂ,’ಆಯುರ್, ಆರೊಗ್ಯ, ಐಶ್ವರ್ಯ, ನೆಮ್ಮದಿಯನ್ನು’ ದಯಪಾಲಿಸಲಿ ಎಂದು ಬೇಡುತ್ತ ನನ್ನ ಮನದಾಳದ ಎರಡು ಮಾತುಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಓದುವಿರಲ್ಲವೆ?

ನಿಮ್ಮ ಅಮೂಲ್ಯವಾದ ಸಮಯ ಕೊಟ್ಟು, ತಾಳ್ಮೆಯಿಂದ ಓದಿದ್ದಕ್ಕೆ ನನ್ನ ಅನಂತಾನಂತ ಧನ್ಯವಾದಗಳು ಮತ್ತು ನಮಸ್ಕಾರಗಳು. 

ಇಂತಿ ನಿಮ್ಮವ,
ರವಿ ಪ್ರಕಾಶ್ ಏ. ಎಸ್.
ಕರೆ ಅಂಕೆ: +೯೬೮ ೯೫೫೬೨೬೭೫