ವಿಭಾಗಗಳು

Monday, March 31, 2014

ಬೇವು ಬೆಲ್ಲದ ಉಗಾದಿ ಹಬ್ಬ

ಲೇಖಕರು: ರವಿಪ್ರಕಾಶ ಎ. ಎಸ್.

ಧನ್ಯವಾದಗಳು ಓಂಕಾರ ಸಮಿತಿ,

ಎಲ್ಲರಿಗೂ ನಮಸ್ಕಾರ ಹಾಗೂ ವರ್ಷದ ಆರಂಭದ ಹಬ್ಬವಾದ - ’ಉಗಾದಿ ಹಬ್ಬ’ದ ಶುಭಾಷಯಗಳು. ಬೇವು ಬೆಲ್ಲ ತಿಂದು ಸುಖವಾಗಿರಿ.

ಬೇವು-ಬೆಲ್ಲದ ಸವಿಯ ಒಳ ಅರ್ಥ

ನಮ್ಮೆಲ್ಲರ ಬಂಧು ಮತ್ತು ಗೆಳೆಯರಿಗೆಲ್ಲಾ ಉಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಲು ಬಹಳ ಖುಶಿ ಅನಿಸಿದೆ. ಈ ವರುಷ ನಮ್ಮೆಲ್ಲರ ಜೀವನದಲ್ಲಿ ಆರೋಗ್ಯ, ಹರುಷ, ಗೆಲುವು, ಶಾಂತಿ, ಪ್ರಗತಿಯನ್ನೆಲ್ಲಾ ತಂದು ಕೊಡಲಿಯೆಂದು ಆಶಿಸುತ್ತೇನೆ ಎಂದು ಆ ಪರಮಾತ್ಮನಲ್ಲಿ ಬೇಡುತ್ತೇನೆ. 

ಉಗಾದಿ ಹಬ್ಬ ಒಂದು ಸಾಮಾಜಿಕ ಚಿಂತನೆ ಒಳಗೊಂಡಂತಹ ಹಬ್ಬ. ಈ ಹಬ್ಬ ಕಷ್ಟ - ಸುಖದ ಸಾಂಕೇತಿಕವಾಗಿದೆ. ಭೇವು-ಬೆಲ್ಲ ಅಂದರೆ ಬೇವು ಕಹಿ - ಅಂದರೆ ಕಷ್ಟ, ಬೆಲ್ಲ ಸಿಹಿ - ಅಂದರೆ ಸುಖ ಎಂದರ್ಥ. ಪ್ರತಿ ಒಂದು ಜೀವರಾಶಿಯಲ್ಲಿ ಕಷ್ಟ-ಸುಖ ತಪ್ಪಿದಲ್ಲ. ಇದು ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ. 

ಕಷ್ಟ ಬಂದಾಗ ಕುಗ್ಗದೆ ಮತ್ತು ಸುಖ ಬಂದಾಗ ಹಿಗ್ಗದೆ, ಈ ಎರಡನ್ನು ಸಮನಾಗಿ ಅರಿತು ಬಾಳುವುದನ್ನ ಕಲಿಸುತ್ತೆ ಈ ಉಗಾದಿ ಹಬ್ಬ, ಬೇವು-ಬೆಲ್ಲ ತಿನ್ನಿಸುವ ಮೂಲಕ. 

ಅದಕ್ಕಲ್ಲವೆ ನಾವು ಹೇಳೋದು "ಬೇವು ಬೆಲ್ಲ ತಿಂದು ಸುಖವಾಗಿರಿ" ಎಂದು. ಅಂದರೆ ಕಷ್ಟ - ಸುಖ ಜೀವನದಲ್ಲಿ ಬರುತ ಇರುತ್ತೆ ಅದನ್ನ ಸಮನಾಗಿ ತೆಗೆದುಕೊಂಡಾಗ ಬಾಳು ಹಸನಾಗುತ್ತೆ ಎಂದರ್ಥ. ಬೇವಿನ ಕಹಿಯನ್ನ ಬೆಲ್ಲದ ಸಿಹಿಯೊಂದಿಗೆ ಬೆರೆಸಿ ತಿಂದಾಗ ಉಂಟಾಗುವ ಸವಿಯೇ ಈ ಕಷ್ಟ -ಸುಖದ ಸವಿ. ಹೀಗೆ ಕಷ್ಟ - ಸುಖದ ಸಮ್ಮಿಶ್ರಣದೊಂದಿಗೆ ನಮ್ಮೆಲ್ಲರ ಜೀವನವನ್ನು ಸಿಹಿಯಾಗಿಸಿಕೊಳ್ಳಿ ಬಂಧುಗಳೇ.

ಹೀಗೂ ಮಸ್ಕತ್ ನಲ್ಲಿ ಬೇವಿನ ಮರಗಳಿಗೇನು ಕೊರತೆ ಇಲ್ಲ ಹಾಗೆ ಬೆಲ್ಲದ ಅಚ್ಚಿಗೂ ಕೊರತೆ ಇಲ್ಲ, ಹಾಗಾಗಿ ನಾವೆಲ್ಲ ಇಲ್ಲಿ ಇದ್ದುಕೊಂಡು ಉಗಾದಿ ಹಬ್ಬವನ್ನ ಸಂತೋಷದಿಂದ ಆಚರಿಸಿ ನಮ್ಮ ಕಷ್ಟ-ಸುಖವನ್ನು ಸಮನಾಗಿ ನಮ್ಮ ನಮ್ಮ ಜೀವನದಲ್ಲಿ ಸವಿಯುತ್ತ ಸಹ ಬಾಳ್ವೆಯನ್ನು ನಡೆಸುವ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.

ಬೇವಿನ ಕಹಿ ಮತ್ತು ಬೆಲ್ಲದ ರುಚಿ ಸವಿದವನೆ ಬಲ್ಲ ಅಂದ ಹಾಗೆ, ತಾವೆಲ್ಲರೂ ಬೇವು-ಬೆಲ್ಲ ಸವಿದು ಜೀವನದಲ್ಲಿ ಕಷ್ಟ-ಸುಖವನ್ನು ಸಮನಾಗಿಸಿಕೊಳ್ಳಿ. ಆ ದೇವರು ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿಯೆಂದು ಆಶಿಸುವ. 

ಇಂತಿ ನಿಮ್ಮವನೇ ಆದ,
ರವಿ ಪ್ರಕಾಶ.

No comments:

Post a Comment